Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಭಾರತದ ಬಾಹ್ಯಾಕಾಶ ಪಿತಾಮಹ ವಿಕ್ರಮ ಸಾರಾಭಾಯಿ

ಭಾರತದ ಬಾಹ್ಯಾಕಾಶ ಪಿತಾಮಹ ವಿಕ್ರಮ ಸಾರಾಭಾಯಿ

Monday August 12, 2019 , 2 min Read

q

ವಿಕ್ರಮ ಸಾರಾಭಾಯಿಯವರು ಪ್ರಖ್ಯಾತ ವಿಜ್ಞಾನಿ ಮತ್ತು ಸಂಶೋಧನಕಾರರಾಗಿದ್ದರು. ಭಾರತದ ಬಾಹ್ಯಾಕಾಶ ಪಿತಾಮಹರೆಂದೇ ಇವರು ಪ್ರಖ್ಯಾತರಾಗಿದ್ದಾರೆ.


ತಮ್ಮ 28 ನೇ ವಯಸ್ಸಿಗೆ ಅಹಮದಾಬಾದಿನಲ್ಲಿ ಭೌತಿಕ ಸಂಶೋಧನಾ ಪ್ರಯೋಗಾಲಯವನ್ನು (ಪಿ ಆರ್ ಎಲ್) ಸ್ಥಾಪಿಸಿದರು. ಸಾರಾಭಾಯಿಯವರು ಹಲವಾರು ಸಂಸ್ಥೆಗಳ ಸೃಷ್ಟಿಕರ್ತ ಮತ್ತು ಸಂಸ್ಥಾಪಕರಾಗಿದ್ದರು. ಆ ದಿಕ್ಕಿನಲ್ಲಿ ಪಿ ಆರ್ ಎಲ್ ಅವರ ಮೊದಲ ಹೆಜ್ಜೆಯಾಗಿತ್ತು.


ಡಾ. ಸಾರಾಭಾಯಿ ಸ್ಥಾಪಿಸಿದ ಕೆಲವು ಪ್ರಸಿದ್ಧ ಸಂಸ್ಥೆಗಳು.


  • ಭೌತಿಕ ಸಂಶೋಧನಾ ಪ್ರಯೋಗಾಲಯ (ಪಿ ಆರ್ ಎಲ್)
  • ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ (ಐ ಐ ಎಮ್) ಅಹಮದಾಬಾದ್
  • ಸಮುದಾಯ ವಿಜ್ಞಾನ ಕೇಂದ್ರ ಅಹಮದಾಬಾದ್
  • ವಿಕ್ರಮ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ, ತಿರುವನತಪುರಂ
  • ವೇಗದ ಬ್ರೀಡರ ಟೆಸ್ಟ್ ರಿಯಾಕ್ಟರ್ (ಎಫ್ ಬಿ ಟಿ ಆರ್) ಕಲ್ಪಕಂ
  • ವೇರಿಯಬಲ್ ಎನರ್ಜಿ ಸೈಕ್ಲೋಟ್ರಾನ್ ಯೋಜನೆ, ಕಲ್ಕತ್ತಾ
  • ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇ ಸಿ ಐ ಎಲ್) ಹೈದರಾಬಾದ್
  • ಯುರೇನಿಯಂ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಯು ಸಿ ಐ ಎಲ್) ಬಿಹಾರ್


ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ಥಾಪನೆಯು ಅವರ ದೊಡ್ಡ ಸಾಧನೆಗಳಲ್ಲಿ ಒಂದಾಗಿದೆ. ರಷ್ಯಾದ ಸ್ಪುಟ್ನಿಕ್ ಉಡಾವಣೆಯ ನಂತರ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಬಾಹ್ಯಾಕಾಶ ಕಾರ್ಯಕ್ರಮದ ಮಹತ್ವವನ್ನು ಯಶಸ್ವಿಯಾಗಿ ಸರಕಾರಕ್ಕೆ ಮನವರಿಕೆ ಮಾಡಿದರು. ಡಾ. ಸಾರಾಭಾಯಿ ತಮ್ಮ ಉಲ್ಲೇಖದಲ್ಲಿ ಬಾಹ್ಯಾಕಾಶ ಕಾರ್ಯಕ್ರಮದ ಮಹತ್ವವನ್ನು ಒತ್ತಿ ಹೇಳಿದರು.


“ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ಬಾಹ್ಯಾಕಾಶ ಚಟುವಟಿಕೆಗಳ ಪ್ರಸ್ತುತತೆಯನ್ನು ಪ್ರಶ್ನಿಸುವ ಕೆಲವರು ಇದ್ದಾರೆ. ನಮಗೆ, ಉದ್ದೇಶದ ಯಾವುದೇ ಅಸ್ಪಷ್ಟತೆಯಲ್ಲಿ ಚಂದ್ರ, ಗ್ರಹಗಳ ಪರಿಶೋಧನೆಯಲ್ಲಿ ಅಥವಾ ಆರ್ಥಿಕವಾಗಿ ಮುಂದುವರೆದ ರಾಷ್ಟ್ರಗಳೊಂದಿಗೆ ಸ್ಪರ್ಧಿಸುವ ಕಲ್ಪನೆ ನಮ್ಮಲ್ಲಿಲ್ಲ. ಆದರೆ ರಾಷ್ಟ್ರೀಯವಾಗಿ ಮತ್ತು ರಾಷ್ಟ್ರಗಳ ಸಮುದಾಯದಲ್ಲಿ ಅರ್ಥಪೂರ್ಣ ಪಾತ್ರವನ್ನು ವಹಿಸಬೇಕಾದರೆ, ಮನುಷ್ಯ ಮತ್ತು ಸಮಾಜದ ನೈಜ ಸಮಸ್ಯೆಗಳಿಗೆ ಸುಧಾರಿತ ತಂತ್ರಜ್ಞಾನಗಳ ಅನ್ವಯಿಕೆಯಲ್ಲಿ ನಾವು ಮುಂದುವರೆಯಬೇಕೆಂದು ನಮಗೆ ಮನವರಿಕೆಯಾಗಿದೆ.”


ಇದಲ್ಲದೆ ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರೂ ಆಗಿದ್ದರು. ಅಹಮದಾಬಾದ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ರಚನೆಯಲ್ಲಿ ಅವರು ಅಹಮದಾಬಾದ್ ಮೂಲದ ಇತರ ಕೈಗಾರಿಕೋದ್ಯಮಗಳೊಂದಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ.


ಭಾರತದ ಪರಮಾಣು ವಿಜ್ಞಾನ ಕಾರ್ಯಕ್ರಮದ ಪಿತಾಮಹ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿರುವ ಡಾ. ಹೋಮಿ ಜಹಾಂಗೀರ್ ಬಾಬಾ ಅವರು ಭಾರತದಲ್ಲಿ ಮೊದಲ ರಾಕೆಟ್ ಉಡಾವಣಾ ಕೇಂದ್ರವನ್ನು ಸ್ಥಾಪಿಸುವಲ್ಲಿ ಡಾ. ಸಾರಾಭಾಯಿ ಅವರನ್ನು ಬೆಂಬಲಿಸಿದರು. ಈ ಕೇಂದ್ರವನ್ನು ಅರೇಬಿಯನ್ ಸಮುದ್ರ ತೀರದಲ್ಲಿರುವ ತಿರುವನಂತಪುರಂ ಬಳಿಯ ‘ತುಂಬಾ’ ದಲ್ಲಿ ಸ್ಥಾಪಿಸಲಾಯಿತು. ಮೂಲ ಸೌಕರ್ಯ, ಸಿಬ್ಬಂದಿ, ಸಂವಹನ ಸಂಪರ್ಕ ಮತ್ತು ಲಾಂಚ್ ಪ್ಯಾಡ್ ಗಳನ್ನು ಸ್ಥಾಪಿಸುವಲ್ಲಿ ಗಮನಾರ್ಹ ಪ್ರಯತ್ನದ ನಂತರ, ಉದ್ಘಾಟನಾ ಹಾರಾಟವನ್ನು 21, 1963 ರಂದು ಸೋಡಿಯಂ ಆವಿ ಪೆಲೋಡ್ ನೊಂದಿಗೆ ಪ್ರಾರಂಭಿಸಲಾಯಿತು.


1966 ರಲ್ಲಿ ನಾಸಾ ಅವರೊಂದಿಗಿನ ಡಾ. ಸಾರಾಭಾಯಿ ಅವರ ಸಂಭಾಷಣೆಯ ಪರಿಣಾಮವಾಗಿ ಜುಲೈ 1975 - ಜುಲೈ1976 ರಲ್ಲಿ ಉಪಗ್ರಹ ಸೂಚನಾ ದೂರದರ್ಶನ ಪ್ರಯೋಗವನ್ನು(ಸೈಟ್) ಪ್ರಾರಂಭಿಸಲಾಯಿತು.


ಮೊದಲ ಭಾರತೀಯ ಉಪಗ್ರಹವಾದ ‘ಆರ್ಯಭಟ’ ವನ್ನು 1975 ರಲ್ಲಿ ರಷ್ಯಾದ ಕಾಸ್ಮೋಡ್ರೋಮ್ ನಿಂದ ಕಕ್ಷೆಗೆ ಹಾರಿಸಲಾಯಿತು. ಇದರ ಯೋಜನೆಯನ್ನು ಡಾ. ಸಾರಾಭಾಯಿ ಯವರು ಪ್ರಾರಂಭಿಸಿದ್ದರು.


ವಿಜ್ಞಾನ ಶಿಕ್ಷಣದಲ್ಲಿ ಬಹಳ ಆಸಕ್ತಿ ಹೊಂದಿದ್ದ ಡಾ. ಸಾರಾಭಾಯಿಯವರು 1966 ರಲ್ಲಿ ಅಹಮದಾಬಾದ್ ನಲ್ಲಿ ಸಮುದಾಯ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಿದರು. ಇಂದು ಈ ಕೇಂದ್ರವನ್ನು ವಿಕ್ರಮ ಸಾರಾಭಾಯಿ ಸಮುದಾಯ ವಿಜ್ಞಾನ ಕೇಂದ್ರವೆಂದು ಕರೆಯಲಾಗುತ್ತದೆ.


ಡಾ. ಸಾರಭಾಯಿಯವರು 1962 ರಲ್ಲಿ ಶಾಂತಿ ಸ್ವರೂಪ ಭಟ್ನಾಗರ್ ಪದಕವನ್ನು ಪಡೆದರು. 1966 ರಲ್ಲಿ ಪದ್ಮಭೂಷಣ ವನ್ನು ಸ್ವೀಕರಿಸಿದರು. ಅದಲ್ಲದೆ ಮರಣೋತ್ತರವಾಗಿ 1972 ರಲ್ಲಿ ಪದ್ಮ ವಿಭೂಷಣ ನೀಡಿ ಗೌರವಿಸಲಾಯಿತು.